Wednesday, June 10, 2015

ನನ್ನಾಕೆ

ಹಳ್ಳಿಗಾಡಿನ ಹೊಲದ
ಬದುಕುವ ತೆನೆಗಳ
ಆರಿಸಿ ರಾಗಿಯ ತಂದೆ |

ಜೂಳ್ಳು ಹಾರಿಸಿ ಕಾಳು ಕುಟ್ಟಿ
ಪುಡಿಮಾಡಿ ಹಿಟ್ಟು ಮಾಡಿದೆ
ನೀರು ಬೆರೆಸಿ ಹದವಾಗಿ ತಟ್ಟಿದೆ|

ಕಾರುವ ಬೆಂಕಿ ಬಾಣಲೆಯಲ್ಲಿ
ಹಾಕಿ ಸುಟ್ಟೆ. ಬೇಯಿಸಿದೆ
ಗಟ್ಟಿ ಕಡಕ್ ರೊಟ್ಟಿ ಮಾಡಿದೆ|

ನೆಗ್ಗಿದ ಆಲ್ಯೂಮೀನಿಯಂ
ಬಟ್ಟಲಿನಲ್ಲಿ ಹಾಕಿದೆ
ಖಾರದ ಚಟ್ನಿ ಬೆರೆಸಿದೆ|

ಹದವಾಗಿ ಮುರಿದು ಬಾಯಿಗೆ ಇಡುವ
ಮುನ್ನ ನನ್ನಾಕೆ ಎಂದಳು ರೊಟ್ಟಿ
ಬೇಡ ನಾಳೆ ನನ್ನನ್ನು ಅಂಬಲಿ ಮಾಡಿ|


***

(ಈ ಕವಿತೆಯನ್ನು ಬರೆದಿರುವುದು ಶಿರಸಿ ಮಾರಿಕಾಂಬಾ ನಗರದಲ್ಲಿ ಜೂ.10, 2015ರಂದು)

No comments:

Post a Comment