Wednesday, June 3, 2015

ಮೌನಿಯಾಗು

ಮೌನಿಯಾಗು ಮನವೇ, ನೀ
ಮೌನಿಯಾಗು ಮನವೆ ||

ಅಲ್ಲಿ ಇಲ್ಲಿ ನೀ ನೋಡದೇ
ಅಲ್ಲಿ ಇಲ್ಲಿ ನೀ ಓಡದೇ
ಢ್ಯಾನಿಯಾಗು ಮನವೇ | ನೀ
ಜ್ಞಾನಿಯಾಗು ಮನವೇ ||

ಹಗಲಲಿ ಕನಸು ಕಾಣದೇ , ನೀ
ಮಾತಲಿ ಮನೆಯ ಕಟ್ಟದೇ
ಬಾವಿಯಾಗು ಮನವೇ | ನೀ
ಅನುಭಾವಿಯಾಗು ಮನವೇ ||

ಕಾಡು ಹರಟೆಯಾ ಆಡದೇ, ನೀ
ಪೊಳ್ಳು ಕೆಲಸವಾ ಮಾಡದೇ
ಶುದ್ಧವಾಗು ಮನವೇ | ನೀ
ಪರಿಶುದ್ಧವಾಗು ಮನವೇ ||

ಪ್ರೀತಿ ಸಹನೆಯ ತೊರೆಯದೇ, ನೀ
ಕಷ್ಟ ದುಃಖಗಳ ಮರೆಯದೇ
ಶಕ್ತಿಯಾಗು ಮನವೇ | ನೀ
ಆತ್ಮದ ಭಕ್ತಿಯಾಗು ಮನವೇ ||

***
(ಈ ಕವಿತೆಯನ್ನು ಬರೆದಿರುವುದು 26-05-2005ರಂದು ಕಾನಲೆಯಲ್ಲಿ)
(ಈ ಕವಿತೆಯನ್ನು ಶಿರಸಿ ತಾಲೂಕಿನ ಉಂಚಳ್ಳಿಯ ಓದುಗರ ವೇದಿಕೆ ಹಮ್ಮಿಕೊಂಡಿದ್ದ ಕವಿಗೋಷ್ಟಿಯಲ್ಲಿ ವಾಚನ ಮಾಡಲಾಗಿದೆ. ಇದೊಂದು ಅಂತರ್ಮುಖಿ ಕವಿತೆ ಎಂದು ಖ್ಯಾತ ವಿಮರ್ಷಕ ಆರ್. ಡಿ. ಹೆಗಡೆ ಆಲ್ಮನೆ ಅವರು ನುಡಿದಿದ್ದಾರೆ)

No comments:

Post a Comment