Tuesday, March 17, 2015

ಅಂ-ಕಣ-3

ಸುಮ್ನೇ ಕೇಳಕಂಡಿದ್ದು :-
ಸಮಾಜಕ್ಕೆ ಬುದ್ಧಿ ಹೇಳೋ ಪತ್ರಕರ್ತರಿಗೆ ಹಳ್ಳಿ ದಾರಿ ಕಾಣಿಸುತ್ತಿಲ್ಲ..
ಇನ್ನು ಈ ಜಮಾನಾದ ಯುವಕರಿಗೆ ಕಾಣಿಸುತ್ತಾ?

ಪ್ರಶ್ನೋತ್ತರ ಕಾಂಡ
ನಾನು ಹೇಳಿದೆ :
ಹಳೆಯ ಕವಿತೆ ಮತ್ತೆ ಸಿಕ್ಕಿದೆ
ನೆನಪಾಗಿದೆ
ಅವಳು ಕೇಳಿದ್ದು :
ಯಾರವಳು ಕವಿತಾ?

ಸರಣಿ-ಸರಪಣಿ
ಮೂರು ವರ್ಷದ ಹಿಂದೆ ದಾಂಡೇಲಿಯಲ್ಲಿ ಎಸಿಎಫ್ ಮದನ ನಾಯ್ಕ
ಒಂದೂವರೆ ವರ್ಷದ ಹಿಂದೆ ಪೊಲೀಸ್ ಅಧಿಕಾರಿ ಬಂಡೆ..
ಇದೀಗ ಡಿ. ಕೆ. ರವಿ.
ಇನ್ನೆಷ್ಟು ಬಲಿ ಬೇಕು ಪ್ರಾಮಾಣಿಕರದ್ದು?
ಇಷ್ಟೆಲ್ಲ ಬಲಿಯಾಗುತ್ತಿದ್ದರೂ ನಿದ್ದೆರಾಮಯ್ಯ ಇನ್ನೂ ಎದ್ದಿಲ್ಲವಲ್ಲ..

ಪಾದಯಾತ್ರೆ ಪುರಾಣ
2012ರ ವಿಧಾನಸಭಾ ಚುನಾವಣೆಗೂ ಮುನ್ನ ಬಳ್ಳಾರಿ ಸರಿಯಿಲ್ಲ ಅಂತ ನಿದ್ದೆರಾಮಯ್ಯ ಪಾದಯಾತ್ರೆ ಮಾಡಿದರು.
ಇದೀಗ ನಿದ್ದೆರಾಮಯ್ಯರ ನೇತೃತ್ವದಲ್ಲಿ ಕರ್ನಾಟಕವೇ ಸರಿಯಿಲ್ಲವಲ್ಲ..
ಹೇಳಿ ಎಲ್ಲಿಗೆ ಪಾದಯಾತ್ರೆ ಮಾಡೋಣ?

ಸಿಕ್ಕಾಪಟ್ಟೆ ಅಸಮಧಾನ:
ಬಳ್ಳಾರಿಗರ ಕಂಡು
ತೊಡೆತಟ್ಟಿ ನಿಂತಿದ್ದ ನಿದ್ದೆರಾಮಯ್ಯ
ಬೆಂಗಳೂರನ್ನೇ ಕಂಡು
ತೊಡೆಮುರಿದು ಬಿದ್ದಿದ್ದಾನೆ |

No comments:

Post a Comment