Tuesday, August 5, 2014

ಬನಿಯಂತಹ ಹನಿಗಳು

ನೆನಪು

ಕೆಲವು ಹೆಸರುಗಳು

ಬದುಕಿನ ತುಂಬ 
ನೆನಪಾಗುತ್ತವೆ..|
ಮತ್ತೆ ಕೆಲವು ವ್ಯಕ್ತಿಗಳು
ಜೀವನದ ತುಂಬೆಲ್ಲ
ಹುಣ್ಣಿನಂತೆ
ಕಾಡುತ್ತಾರೆ..||

ಅಜಗಜಾಂತರ

ಹಿಂದೊಮ್ಮೆ ಆಗಿದ್ದವು
ಕೊಳವೆ ಬಾವಿಗಳು
ನೀರಿನ ಚಿಲುಮೆಗಳು
ಈಗ ಆಗಿವೆ
ಮುಗ್ದ ಕಂದಮ್ಮಗಳನ್ನು
ಬಲಿ ಪಡೆಯುವ
ಶವ ಪೆಟ್ಟಿಗೆಳು |

ಅದೃಷ್ಟ

ನಿಮಗೆ
ಬೇರೆ ಸುದ್ದಿಯೇ ಇಲ್ಲವೇ
ಎಂದು ರೇಗಾಡುತ್ತಿದ್ದರು ಸಿದ್ದಣ್ಣ..
ಅವರ ಲಕ್ಕೋ ಎಂಬಂತೆ
ಸಿಕ್ಕರು
ವಿ. ಆರ್. ಭಟ್ಟರು
ಮಾಧ್ಯಮದ ಬಾಯಿಗೆ
ಬಿದ್ದರು |

ಬಲಿ

ಚೀರಾಡುವ 
ಬಾಯಿಗಳಿಗೆ
ಸಿಗುವವರು ಮಾತ್ರ
ಪುರೋಹಿತ 
ಶಾಹಿಗಳು

No comments:

Post a Comment