Monday, August 25, 2014

ಹೊಸ ಹನಿಗಳು

ಹೇಳಿಕೆ


ಅಚ್ಛೆ ದಿನ ಆನೆವಾಲೇ ಹೈ

ಎಂದು ಮೋದಿ ಹೇಳುತ್ತಿದ್ದರೂ
ಪೆಟ್ರೂಲ್ ಬೆಲೆ ಹೆಚ್ಚಾಗಿದೆ ನೋಡಿ
ಎಂದರು ಯು. ಟಿ. ಖಾದರು |
ಕಳೆದ ಹತ್ತು ವರ್ಷಗಳಿಂದ
ಅವರು ಸುಮ್ಮನಿದ್ದರು ||


ಹೊಣೆಗಾರಿಕೆ



ರಾಷ್ಟ್ರದಲ್ಲಿ ಹೀನಾಯ

ಸೋಲನ್ನು ಅನುಭವಿಸಿದ್ದರೂ
ಉಪ ಚುನಾವಣೆಯಲ್ಲಿ
ಗೆದ್ದ ತಕ್ಷಣ
ಸೋಲಿನ ಹೊಣೆ ಹೊತ್ತು
ಮೋದಿ ರಾಜಿ ನಾಮೆ ಕೊಡಬೇಕು
ಎಂದರಂತೆ ಕಾಂಗ್ರೆಸ್ಸಿಗರು |


ನಾಯಕತ್ವ



ರಾಷ್ಟ್ರದಲ್ಲಿ ಕಾಂಗ್ರೆಸ್

ಸೋತಾಗ ಕಾಂಗ್ರೆಸ್ಸಿಗರು
ಸೋಲಿಗೆ ಎಲ್ಲರೂ ಹೊಣೆ ಎಂದರು |
ಉಪ ಚುನಾವಣೆಯಲ್ಲಿ 
ಕಾಂಗ್ರೆಸ್ ಗೆದ್ದಾಗ ಮಾತ್ರ
ರಾಹುಲ್ ಗಾಂಧಿ ಯುವ ನಾಯಕತ್ವ
ಕಾರಣ ಎಂದರು. ||

ಪತಿವೃತೆ


ಪತಿಯನ್ನೇ
ವೃತವೆಂದು ತಿಳಿದು
ಸದಾಕಾಲ ಆತನನ್ನೇ
ಸೇವಿಸುವವಳು
ಪತಿವೃತೆ ||


ರಮ್ಯ

ಆಕೆ ಬಹು ರೂಪವತಿ
ರಮ್ಯ|
ನೋಡಲೂ ಕೂಡ ಅಷ್ಟೇ
ರಮ್ಯ |
ಜೊತೆಗೆ ಬಯಸಿದಾಗಲೆಲ್ಲ
ಮತ್ತು ನೀಡುವಳು
ಅದೇ RUMಯಾ ||

No comments:

Post a Comment