Friday, August 22, 2014

ಕಹಿ ಕಹಿ ಹನಿಗಳು

ಇಬ್ಬಗೆ

ಇಸ್ರೇಲಿ ಯೋಧರು
ಭಯೋತ್ಪಾದಕರನ್ನು ಕೊಂದರೆ
ಭಾರತದ ಬುದ್ಧಿ ಜೀವಿಗಳು
ಕೂಗ್ಯಾಡಿದರು. ಹುಯ್ಯಲಿಟ್ಟರು.
ಅತ್ತು ಕರೆದರು..|
ಮಾನವ ಹಕ್ಕುಗಳ ಉಲ್ಲಂಘನೆಯೆಂದರು. |
ಉಗ್ರರು
ಪತ್ರಕರ್ತರ ತಲೆ ಕಡಿದರು |
ಭಾರತದ ಬುದ್ಧಿ ಜೀವಿಗಳು
ನಿದ್ದೆಹೋದರು,
ಸುಮ್ಮನುಳಿದರು ||

ಎರಡು ಮುಖ

ಮದನಿಗೆ ಹಿಂದೂಗಳ ಮೆಲೆ ಸಿಟ್ಟು
ಭಾರತೀಯರನ್ನು ಕೊಲ್ಲಲು
ಸದಾ ಹವಣಿಸುವ ಪಟ್ಟು|
ಆದರೆ ಆರೋಗ್ಯ ಉಳಿಸಿಕೊಳ್ಳಲು
ಬೇಕಾಗಿದ್ದು ಮಾತ್ರ
ಆಯುರ್ವೇದ ಎಂಬುದು
ಬಚ್ಚಿಟ್ಟ ಗುಟ್ಟು ||

ವಾಟಾಳ ಪ್ರತಾಪ

ಕನ್ನಡದ ಕುರಿತು
ಯಾವಾಗಲೂ ಎದ್ದರು
ವಾಟಾಳರು |
ಉಳಿದ ಸಮಯದಲ್ಲಿ ಮಾತ್ರ
ಯಾವಾಗಲೂ ಕಾಣರು |

ಬುದ್ದಿಜೀವಿಯೆಂದರೆ

ಬುದ್ಧಿ ಜೀವಿಗಳೆಂದರೆ
ಬುದ್ದಿ ಹೆಚ್ಚಾಗಿ
ಲದ್ದಿಗಳಂತಾಗಿರುವ
ಜೀವಿಗಳು |

No comments:

Post a Comment